ಸ್ವಾಮಿ ಡೇವಿಡ್ ಅರುಳಪ್ಪನವರು ೧೩-೦೮-೧೯೬೭ ರಲ್ಲಿ ಬೆಂಗಳೂರು ಜಿಲ್ಲೆಯ ದೊರೆಸಾನಿಪಾಳ್ಯದಲ್ಲಿ ಜನಿಸಿದರು. == ಶಿಕ್ಷಣ == ಇವರು ಬೆಂಗಳೂರಿನ ಸಂತ ರಾಯಪ್ಪರ ಗುರು ಮಂದಿರದಲ್ಲಿ ತತ್ವ ಶಾಸ್ತ್ರವನ್ನು ಮುಗಿಸಿ, ನಂತರ ದ್ಯೆವಶಾಸ್ತ್ರವನ್ನು ಹೈದರಾಬಾದಿನ ಸಂತ ಯೊವಾನ್ನರ ಗುರುಮಠದಲ್ಲಿ ಮುಗಿಸಿದರು. == ಜೀವನ == ಅವರು ತಮ್ಮ ಸ್ವಗ್ರಾಮದ ದೊರೆಸಾನಿಪಾಳ್ಯದಲ್ಲಿ ೧೩-೦೩-೧೯೯೭ರಲ್ಲಿ ಕರ್ನೂಲು ದರ್ಮಪ್ರಾಂತ್ಯದ ಪರವಾಗಿ ಗುರುದೀಕ್ಶೆಯನ್ನು ಮೈಸೂರಿನ ದಿವಂಗತ ಧರ್ಮದ್ಯಕ್ಶರಾದ ವಂದನೀಯ ಜೊಸೆಫ್ ರಾಯ್ ರವರಿಂದ ಸ್ವೀಕರಿಸಿದರು. ಇವರು ಗುರುವಾದ ನಂತರ, ೧೯೯೭-೨೦೦೦ -- ದರ್ಮದ್ಯಕ್ಶರ ಆಪ್ತ ಕಾರ್ಯದರ್ಶಿಯಾಗಿ, ೨೦೦೦-೨೦೦೯ -- ದರ್ಮಪ್ರಾಂತ್ಯದ ಸಾಮಾಜಿಕ ನಿರ್ದೆಶಕರಾಗಿ, ೨೦೦೯-೨೦೧೦ -- ಗುಂತಕಲ್ಲಿನ ಆರೋಗ್ಯಮಾತೆಯ ಪುಣ್ಯಕ್ಶೇತ್ರ ವಿಚಾರಣೆಯ ಗುರುಗಳಾಗಿ ಸೇವೆ ಸಲ್ಲಿಸಿ, ಈಗ ರೋಮಿನಲ್ಲಿರುವ ಗ್ರೆಗೋರಿಯನ್ ಯೂನಿವರ್ಸಿಟಿಯಲ್ಲಿ ಕ್ಯಾನನ್ ಲಾ(ಧರ್ಮಶಾಸ್ತ್ರ) ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾರೆ.